ಶಿರಸಿ: ರಾಜ್ಯ ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ನೀಡುವ ಅತ್ಯುತ್ತಮ ಐ ಕಾಂಟ್ಯಾಕ್ಟ್ ಡೆವಲಪರ್ ಇನ್ ಜಿಯಾಲಜಿ ಫಾರ್ ಕರ್ನಾಟಕ ಐಎಂಎಸ್ ಪ್ರಶಸ್ತಿಗೆ ತಾಲೂಕಿನ ಬೆಂಗಳೆ ಓಣಿಕೇರಿ ಮೂಲದ ಡಾ. ಲಾವಣ್ಯ ಹೆಗಡೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಸ್ತುತ ಕಾರವಾರದ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಲಾವಣ್ಯ ಹೆಗಡೆ ಕಾರ್ಯನಿರ್ವಹಿಸುತ್ತಿದ್ದಾರೆ.